Wednesday, May 29, 2013

ಸವಿ ಸವಿ ನೆನಪು

ಸತ್ಯಭಾಮಾ ಎಲ್ಲಿ....
ಆ... ಮಾಡು ಹಾಗೆ ...
ಏನ್ರೀ... ಇದೆಲ್ಲಾ ಈ ...
ವಯಸ್ಸಲ್ಲಿ, ಈ ಸಿಹಿ
ಮಲ್ಲಿಗೆಯ ಹೂ ಮಾಲೆ;
ಜರತಾರಿ ರೇಷ್ಮೇ ಸೀರೆ !
ಅಯ್ಯೋ ಪೆದ್ದೀ ನನಗೆ
ಪ್ರಮೋಶನ್ ಇಲ್ಲ
ಮಣ್ಣಂಗಟ್ಟೀಯೂ ಇಲ್ಲ
ಹಾ ಆಹಾ ನಾಚಿಕೆ ನೋಡು,
ನೆನಪು ಮಾಡಿಕೊಳ್ಳೇ
ಮರೆತೆಯೋ ಹೇಗೆ ಬೇಡದ
ಧಾರಾವಾಹಿಗಳ ಕತೆಗಳೆಲ್ಲವ
ಚಾಚೂ ತಪ್ಪದೆ
ಕಣ್ಣಿಗೆ ಕಟ್ಟುವ ಹಾಗೆ ಹೇಳುವೆ;
ಬಂದಳು ನೋಡು, ಮಗಳು
ನಿನ್ನ ಮೊಮ್ಮಗಳು ಈಗಲಾದರೂ
ಉಂ ಬಂತು ಬಿಡು, ಮೊಮ್ಮಗಳ
ಹುಟ್ಟಿದ ದಿನದ ಹಬ್ಬ,
ಅಯ್ಯೋ ಪೆದ್ದೀ ನನ್ನಾ ನಿನ್ನ
ಮದುವೆಯ ಇಪ್ಪತ್ತಾರರ
ವಾರ್ಷಿಕೋತ್ಸವ
ಈಗ ನೆನಪಿಗೆ ಬಂತೋ ಹೇಗೆ !

Monday, May 27, 2013

ಎಂಥಾ ವಿಪರ್ಯಾಸ

ಗಂಡ ಸತ್ತರೆ
ಹೆಂಡತಿ ವಿಧವೆ
ಮತ್ತಾಗುವಂತಿಲ್ಲ
ಮರು ಮದುವೆ;
ಅವಳ ಕನಸುಗಳೆಲ್ಲಾ
ಛಿದ್ರ ಛಿದ್ರ !

ಹೆಂಡತಿ ಸತ್ತರೆ
ಗಂಡ ವಿಧುರ
ಸತ್ತವಳ ಮರೆತು
ಮತ್ತೊಮ್ಮೆ ಸಪ್ತಪದಿ;
ಅವನ ಸಂಸಾರ
ಮತ್ತಷ್ಟು ಸುಭದ್ರ !

Friday, May 24, 2013

" ಒಲಿದು ಬಾ ನನ್ನೊಲವೆ "

ಒಲಿದು ಬಾ ನನ್ನೊಲವೆ
ಇಳಿದು ಬಾ ನನ್ನೊಲುಮೆ
ವರಿಸು ನನ್ನತ್ತೆಯ ಮಗಳೇ
ಈ ಮುನಿಸು ಇನ್ನೇಕೆ ಮರುಳೇ !

ನಿನಗಾಗಿ ಬಂದಿಹೆ, ನಿದಿರೆ ತೊರೆದೆದ್ದು ಬಾ
ನಿನಗಾಗಿ ಕಾದಿಹೆ, ಕನಸ ಕಡಿದೆದ್ದು ನೀ ಬಾ
ನೀ ನನ್ನ ಕೊಲ್ಲದೆ, ನಿಂತಲ್ಲೇ ನೀ ನಿಲ್ಲದೇ
ನೀ ಓಡೋಡಿ ಬಂದೆನ್ನ ಬರಸೆಳೆದಪ್ಪು ಬಾ !

ನೀ ನನ್ನ ಬಾಳ ಉದ್ದರಿಸಲೂ ಬಾ
ನೀ ನನ್ನ ಕೈಹಿಡಿದು ನಡೆಸು ಬಾ
ನೀ ನನ್ನೆದೆಯ ದೇವಿಯಾಗು ಬಾ
ಬಾರೆ ಬಾ ಮನ ಮಂದಾರ ನೀನಾಗು ಬಾ !

ಧಣಿದ ಮನಕ್ಕಿಂದು
ಧಗೆಗೆ ಮನ ನೊಂದು
ಬಳಲಿ ಬಾಯಾರಿರುವೆ
ನಿನ್ನೊಲವ ಮಳೆ ಸುರಿಸು ಬಾ !

ನೀನಿರದ ಈ ಜಗವು ನನಗೇಕೆ
ನೀನಿರದ ಈ ಕನಸು ನನಗೇಕೆ
ನೀ ಬರದೆ ಈ ಬಾಳು ಬೆಳಕಾಗದೇ
ಬಾರೆ ಬಾ ನೀ ಉಸಿರ ಉಸಿರಾಗಿ ಬಾ !

ನಿನ್ನ ಸಂಗದಲಿ ನನ್ನ ಅಂಗಾಂಗದಲಿ
ಪುಟಿದೆದ್ದ ಕಾಮನೆಯ ನೀ ತಣಿಸು ಬಾ
ಮೆರೆಸು ಬಾ, ಮೈ ಮರೆಸಿ ನಿನ್ನದರಗಳ
ಸವಿ ಜೇನ ಸಿಹಿ ಹನಿಯ ಉಣ ಬಡಿಸು ಬಾ !

Thursday, May 23, 2013

ಹೀಗೊಂದು ಕನಸು

ಬೆಳ್ಳಂ ಬೆಳಿಗ್ಗೆಯೇ.....
ಬುಡು ಬುಡುಕೆಯವನು
ಮನೆ ಮುಂದೆ ಬಂದು
ಬಾಯ್ ಬಡಕ್ಕೋತ್ತಿದ್ದ
ಬಿಟ್ ಬಿಡಿ, ಬಿಟ್ ಬಿಡಿ
ಬರೆಯೋದೆಲ್ಲಾ ನೀವ್
ಈಗ್ಲಿಂದಲೇ ಬಿಟ್ ಬಿಡಿ
ಇಲ್ಲಾಂದ್ರೆ ತಲೆಯಲ್ಲಾ
ಕೆರಕ್ಕೊಳ್ಳಕ್ಕೂ ಕೂದ್ಲು
ಇನ್ಮುಂದೆ ಇರೊಂಗಿಲ್ಲ !

ನನ್ಗೆ ಮೈಯೆಲ್ಲಾ ಕೋಪ
ನೆತ್ತಿಗೇರಿ, ಕುತ್ಗೆ ಹಿಡಿದು
ಏಯ್ ಬುಡ್ ಬುಡ್ಕೇನೇ
ಸಾಕ್ ನಿಲ್ಸಯ್ಯ, ನಿನ್ನ ವರಸೆ
ಏನೋ ಅಲ್ಲೊಂದಿಲ್ಲೊಂದು
ನನ್ನ ಇಷ್ಟಕ್ಕೆ ಬರ್ಕೋತೀನಿ
ನನ್ನ ಮನೆ ಮುಂದೆ ಬಂದು
ಬುಟ್ ಬುಡಿ ಅಂತೇಳಕ್ಕೆ
ನಿನಗೆಷ್ಟು ಧೈರ್ಯನಯ್ಯ
ನೀನ್ ಯಾವೂರ್ ದಾಸಯ್ಯ
ಹೋಗಯ್ಯ ಇಲ್ಲಿಂದ ಎಂದು
ನನ್ನವಳ ಹಾಸಿಗೆಯಿಂದ ಕೆಳಕ್ಕೆ
ತಳ್ಳುತ್ತಿದ್ದೆ, ನನ್ನವಳು ಕೋಪದಿಂದ
ರ್ರೀ.. ಹೇಳ್ರೀ ಬೆಳಗಾಯ್ತು, ಏನ್
ಕನಸ್ಸ್ ಕಾಣ್ತೀರೋ.... ಏನೋ..
ಎದ್ದೋಗಿ ರಾಶಿ ಬಿದ್ದಿರೊ ಪಾತ್ರೆ ತೊಳ್ದು,
ಕಾಫೀ ತಗೊಂಡ್ ಬೇಗ್ ಬನ್ರೀ.. !!

Wednesday, May 22, 2013

ಗೆಳತಿ ನಿನಗಿದು ಅರ್ಪಣೆ

ಎದೆ ತುಂಬಿ ಬಂತು
ಆ ನಿನ್ನ ನೆನಪು,
ಮತ್ತೆ ಮತ್ತೆ
ಬಂದೆನ್ನ ಕಾಡುವುದು;
ನಿನ್ನ ಹುಚ್ಚು ಪ್ರೀತಿಯ
ಮಳೆಗೆ ಕೊಚ್ಚಿ
ಹೋಗಿಹೆನಿಂದು,
ನಾ ಕಣ್ಮುಚ್ಚಿ ಕುಳಿತರೂ
ಆ ನಿನ್ನ ನಗೆಯ
ಪ್ರತಿರೂಪದ ಬಿಂಬ;
ಬಂದೆನ್ನ ಕಾಡುತಿಹದು
ಹೇಗೆ ಹೇಳಲಿ ಹೇಳು
ಈ ಹೃದಯ ಬಗೆದಗೆದು
ತೋರಲೆ ನಿನಗಿಂದು,
ನಿನ್ನ ನಾ ಮೆಚ್ಚಿಸಲು
ಬೆಟ್ಟ ಹತ್ತಿ ನಾ ಇಳಿಯಲೇ
ನಿನ್ನ ಹೊತ್ತೆತ್ತು ತಿರುಗಲೇ
ಮುತ್ತಿತ್ತು ಹೋದವಳು;
ಹೊತ್ತು ಮೀರಿ
ಬರಬಹುದೆಂದು
ಗೊತ್ತು ಗುರಿಯಿಲ್ಲದೆ
ನಾ ನಿದ್ದೆ ಮಾಡದೆ ಕಾದೆನು !

ಮೊದಲ ರಾತ್ರಿ ( First night )

ಅಳಿಯಂದ್ರೇ.... ಸಂಕೋಚ ಬೇಡಿ
ತಿನ್ನೀಯಪ್ಪಾ.. ಅತ್ತೆಯ ಉಪಚಾರ
ಬಗೆ ಬಗೆಯ ತಿಂಡಿ, ಹಣ್ಣು ಹಂಪಲು
ಸಿಹಿ, ತರಹೆವಾರಿ ಭಕ್ಷ ಖಾಧ್ಯಗಳು !

ಒಂದೇ ಎರಡೇ, ನಳಪಾಕದ ಮೃಷ್ಟಾನ್ನ
ತುಪ್ಪದ, ಘಮ ಘಮಿಸುವ ಸುಪರಿಮಳ
ಹೊಸ ಮದುವೆಯ ಹೆಣ್ಣು ಗಂಡಿಗೆ ಅಘ್ರ
ಬಾಳೆ ಎಲೆಯ ಮೇಲೆ ಭೂರೀ ಭೋಜನ !

ಅತ್ತೆಮಾವರ ಆದರಾಭಿಮಾನಕ್ಕೆ
ತಿನ್ನಲಾಗದೆ ನನ್ನವಳ ಕಡೆಯೇ
ದುರಗುಟ್ಟಿದ್ದೆ, ಮೆಲ್ಲಗೆ ಇಲ್ಲಿ ತಿನ್ನಿರಿ
ಅಲ್ಲಿ ನನ್ನ ತಿನ್ನುವರಂತೆ ನಕ್ಕಿದ್ದಳು !

ನಾದಿನಿ ಬಂದು, ಭಾವ ನನಗಾಗಿ ಈ
ಕಾಯಿ ಹೋಳಿಗೆ, ಬಾದಾಮಿ ಹಾಲು
ಕಲಸಿ ತಿನ್ನಿ, ಈ ರುಚಿಯ ಮುಂದೆಲ್ಲ
ಬೇರೆಲ್ಲವೂ ಸಪ್ಪೆ ಸಪ್ಪೆ, ಅಕ್ಕನ ಬಿಟ್ಟು
ನನ್ನ ಹಿಂದೆ ಬರುವಿರೆಂದು ನಗಾಡಿದ್ದಳು !

ನನ್ನೊಬ್ಬನಿಗೆ ಬಡಿಸಿದರೇಗೆ " ಪ್ರಿಯಾ "
ನಿನ್ನಕ್ಕನಿಗೂ ಚೆನ್ನಾಗಿ ತಿನ್ನಿಸಿದರಲ್ಲವೇ
ಹೋರಾಡಲು ಹೆಚ್ಚು ಶಕ್ತಿ ಬರುವುದು
ನಾನು ನನ್ನವಳಿಗೆ ಬೇಡವೆಂದರೂ
ಬಿಡದೆ ಹಟಕ್ಕೆ ಬಿದ್ದು ತಿನ್ನಿಸಿದ್ದೆ ಎನ್ನಿ !

ಅಯ್ಯೋ ವಕ್ರತುಂಡಾ ಚೌತಿಗೆ ಬಂದು
ಹೊಟ್ಟೆ ಬಿರಿಯ ಮೋದಕವ ತಿಂದಂತೆ
ಈ ಹೊಟ್ಟೆ ಉಬ್ಬಸಕ್ಕೆ ಪರಿಹಾರವಿಲ್ಲವೇ
ನಮ್ಮಿಬ್ಬರಿಗೂ ಕಷ್ಟ ಕೊಟ್ಟೆಯಲ್ಲೋ ಗಣಪ !

ಲೋ..ಮೋಹನ ಅಜೀರ್ಣಕ್ಕೆ ಯಾವುದಾರೂ
ಗುಳಿಗೆ ತಗೋಂಡು ಬಾರೋ ನಿಮ್ಮ ಭಾವನಿಗೆ ಅಯ್ಯೋ.... ಅಕ್ಕಾ ಗಂಟೆ ಹತ್ತಾಯಿತಲ್ಲೇ ಎಲ್ಲಾ ಮೆಡಿಕಲ್ ಶಾಪು ಮುಚ್ಚಿರುತ್ತೆ, ಶೆಟ್ಟರಂಗಡಿಯಲ್ಲಿ ತರುವೆನೆಂದು ನನ್ನವಳ ತಮ್ಮ ಹೊರಟಿದ್ದ !!

ಭಾವಾ ತಗೊಳ್ಳಿ ಅಜೀರ್ಣಕ್ಕೆ ಈ ಗುಳಿಗೆಯ
ಇಬ್ಬರೂ ತಿಂದಿದ್ದೆವು, ನನ್ನವಳು ಅಲಾಂಕರಕ್ಕೆ
ನಾ ಪ್ರಸ್ತದ ಕೋಣೆಗೆ, ಮಲ್ಲಿಗೆಯ ಸುವಾಸನೆ
ನನ್ನಲ್ಲಿ ಮತ್ತಷ್ಟು, ನವ ಚೈತನ್ಯ ತಂದಿತ್ತು !

ಮಲ್ಲಿಗೆ ಜಾಜಿ, ಕನಕಾಂಭರ ಕನೈದಿಲೆ, ಸಂಪಿಗೆ ಗುಲಾಬಿ, ಇಡೀ ಮಂಚವೇ ಹೂಗಳಿಂದ ತುಂಬಿತ್ತು ಪನ್ನೀರಿನ ಪರಿಮಳ, ಚಿತ್ತಾಕರ್ಷಕ ಚಿತ್ರಪಟಗಳು
ಹಿತ ಮಿತವಾದ ಸಂಗೀತ, ಧೂಪದ ಸುಗಂದ !

ಸುಮಂಗಲೆಯರ ಕಿಲಕಿಲ ನಗು, ಗೆಜ್ಜೆ ನೂಪುರ ಸರ್ವಲಾಂಕರ ಭೂಷಿತೆ, ದೇವಲೋಕದ ಅಪ್ಸರೆ
ಯರ ನಾಚಿಸುವಂತಿತ್ತು, ನನ್ನವಳ ನಾಚಿಕೆಯ
ಸಿರಿ ಸೊಬಗು,, ಸ್ವರ್ಗಕ್ಕೆ ಇನ್ನು ಮೂರೇ ಗೇಣು !

ರ್ರೀ...ಈಗ ಹೇಗಿದೆ ನಿಮಗೆ, ಈ ಹಾಲು ಕುಡೀರಿ
ಉ ಉಂ ಉಂ ಈ ಹಾಲೆಲ್ಲ ಬೇಡ ನನ್ನ ಚಿನ್ನಾ
ಒಂದು ನಿಮಿಷ ಬಂದೆ ತಾಳು, ಬಾತ್ ರೂಮಿಗೆ
ಹೊರಟೆ, ಇನ್ನೇನು ಕೂರ ಬೇಕು ನನ್ನವಳ ಕರೆ !

ರ್ರೀ... ಬೇಗ್ ಬನ್ರೀ... ಎಷ್ಟೊತ್ತ್ರೀ ಕಾಯೋದು
ನಂಗೆ ತಡಕೊಳ್ಳಕ್ಕಾತ್ತಿಲ್ಲ ಬೇಗ್ ಬನ್ನೀಯಪ್ಪ
ನಾ ಬಂದ ಒಡನೆಯೇ ಅವಳು, ತದನಂತರ
ನಾನು,ಇಡೀ ರಾತ್ರಿ ಇಬ್ಬರಿಗೂ ಭೇದಿಯಿಂದ
ಜಾಗರಣೆ !

Tuesday, May 21, 2013

ಗರ್ಭಾಂಕುರ

ನನ್ನ ಮಳೆಗೆ
ನನ್ನವಳು ನೆನೆದು
ನೆಲೆ ತಪ್ಪಿದವಳಿಗೀಗ
ಮೂರು ತಿಂಗಳುಗಳು;
ಮುಟ್ಟಲೂ ಭಯವೀಗ
ಕಟ್ಟಿರುವ ಗರ್ಭದ
ಕಟ್ಟೆಯೊಡದೀತೆಂದು,
ನವ ಮಾಸಗಳವರೆಗೆ
ನಾ ಕಾಯಬೇಕಲ್ಲಾ ಎಂದು !

ಮಳೆಯೇ ನೀ ತಂಪೆರೆಯೇ

ನಾ ಸುಖಿಸುವುದಾದರೂ
ಹೇಗೆ, ನನ್ನವಳ ಜೊತೆಗೆ
ಈ ಬಿರು ಬಿಸಿಲಿನ ಧಗೆಗೆ;
ನಿಲ್ಲಿ ಕಾರ್ಮೋಡಗಳೇ
ಹಾಗೆಯೇ ಹೋಗದಿರಿ
ಒಂದಷ್ಟು ತಂಪಿನ
ಮಳೆಯ ಸುರಿಸಿರಿ
ನಮ್ಮಿಬ್ಬರಿಗಾಗಿ !

ಈಗಷ್ಟೇ ಮದುವೆಯಲ್ಲಿ
ಮೂರು ಗಂಟಾಕಿರುವೆ
ನನ್ನವಳ ಸಿರಿ ಕೊರಳಿಗೆ
ರಾತ್ರಿಯ ಬೆಳದಿಂಗಳ
ಸುಖ ಸುಪ್ಪತ್ತಿಗೆಯಲ್ಲಿ;
ನಾ ಸುರಿಸ ಬೇಕಿದೆ
ಮುತ್ತಿನ ಮಳೆಯ
ನನ್ನವಳ ಬಾಯಾರಿದ
ಸಿಹಿ ಅದರಿಗಳಿಗಾಗಿ !

ಅನ್ನಪೂರ್ಣೆ

ನನ್ನವಳು ಅಂಥಹ
ಸುಂದರಿಯೇನಲ್ಲ
ಕಡು ಕಪ್ಪಿನ ಹೆಣ್ಣು;
ಆದರೂ ಹೃದಯ
ಶ್ರೀಮಂತಿಕೆಯಲ್ಲಿ
ಅಂದಗಾತಿ ಗುಣವತಿ !
ಮಕ್ಕಳಾಗಲಿಲ್ಲೆಂದು
ಕೊರಗಿ ಕೂರಲಿಲ್ಲ,
ಕಂಡ ಕಂಡ ದೇವರಿಗೆ
ಹರಕೆಯ ಹೊತ್ತು;
ಅರಳಿ ಕಟ್ಟೆಯ ಸುತ್ತಲಿಲ್ಲ
ಬಂಜೆ ಎಂದು ಕರೆದರೂ,
ವ್ರತ ನೇಮಾದಿಗಳ
ಮಾಡಲಿಲ್ಲ, ಬಂದು
ಬೇಡಿದವರಿಗೆ ಅನ್ನವಿತ್ತಳು;
ಅನಾಥ ಮಕ್ಕಳ ಪಾಲಿಗೆ
ತಾಯಿ ಅನ್ನಪೂರ್ಣೆಯಾದಳು !

Saturday, May 18, 2013

" ಶಾಸ್ತ್ರಿಗಳ ಮಗಳು "

ರ್ರೀ...ಸ್ವಲ್ಪ ಈ ಅಡ್ರೆಸ್ಸ್
ಎಲ್ಲಿ ಬರುತ್ತೆ ಅಂತ......
ಫ್ಲೀಜ್ ಹೇಳೋಗ್ತೀರಾ.....
ಮೇಲಿಂದ ಕೆಳಕ್ಕೆ ನೋಡಿ
ಛೀ ಥೂ ಎಲ್ಲಿಂದ ಬರತ್ತಾರೊ
ಈ ಪಾಪಿ ಬೇವರ್ಸಿ ನನ್ಮಕ್ಕಳು
ಜಡೆಯ ಕಂಡರೆ ಸಾಕು, ಜೊಲ್ಲು
ಸುರಿಸ್ತಾರೆ, ಮುಖಕ್ಕೆ ನೇರ
ಮಾತುಗಳಲ್ಲಿ ಉಗಿದಿದ್ದಳು
ಅವಳ ಮಾತಿಂದ ಸಿಟ್ಟೇರಿತ್ತು !

ಹಲೋ! ಮರ್ಯಾದೆ, ಇರಲಿ
ತೋಳೇರಿಸಿ ಕೊಂಡೋದೆ
ಏನ್ರೀ...ಬಾಯಿ ಇದೆ ಅಂತ
ಜೋರ್ ಮಾತಾಡಿದರೆ ಬಾಯ್
ಹೊಲಿ ಬೇಕಾಗುತ್ತೆ, ಹುಶಾರಿರಲಿ ?
ವಿಧ್ಯಾವಂತರಿದ್ದೀರಿ, ನೋಡೋಕೆ
ಈ ರೀತಿ ನೀವ್ ಮಾತಾಡೋಕೆ,
ನಾಚ್ಕೆಯಾಗಲ್ವೇ? ದಬಾಯಿಸಿದ್ದೆ !

ಸಾರಿ ಸರ್, ನಿಮಗಲ್ಲ ನಾನ್ಹೇಳಿದ್ದು
ಅಲ್ಲೊಬ್ಬ ಪೊರ್ಕಿ ಏನ್ ಬುಲ್ ಬುಲ್
ಮಾತಾಡಕ್ಕಿಲ್ಲಾ, ಬರೋಕ್ಕಿಲ್ವಾಂದ
ಅದಕ್ಕೆ ಬಯ್ಕೊಂಡ್ ಬರ್ತಿದ್ದೆ ಐಯಾಂ
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸರ್

ಆ ಅಡ್ರೆಸ್ ಚೀಟಿ ಕೊಡಿ ಎಲ್ಲೋಗ್ಬೇಕೊ
ಹೇಳ್ತೀನಿ, ಚೀಟಿ ಕೈಗಿತ್ತಿದ್ದೆ , ಅದನ್ನೋದಿ
ಓ ಮೈಗಾಡ್, ನಾನು ನಿಮಗಾಗೆ ಬಂದಿದ್ದು
ಅಪ್ಪ ಬರಲಿಕ್ಕಾಗ್ಲಿಲ್ಲ , ತುರ್ತು ಕೆಲಸವಿತ್ತು
ನಾನೇ " ಸತ್ಯಭಾಮ " ಶಾಸ್ತ್ರಿಗಳ ಮಗಳು !

Sumಸಾರ

ದಂಪತಿಗಳಲ್ಲಿ
ಧಮ್ ಇದ್ದರೆ
ಸದಾ, ಲವಲವಿಕೆಯ
ಸಂಸಾರ !
ಲೆಕ್ಕಕ್ಕುಂಟು ಆಟಕ್ಕಿಲ್ಲ
ಎಂದಾದರೆ
ಸದಾ ಜೀವನೋತ್ಸಾಹ
ನಿಸ್ಸಾರ !

ಬಾಯಾರಿಕೆ

ನಲ್ಲೆಗೂ ನಲ್ಲನಿಗೊಂದು ದಿನ
ಪ್ರೇಮ ಪ್ರಣಯದಲ್ಲಿ ಕದನ
ನಲ್ಲನೆಂದ ನಲ್ಲೆಗೆ,
ಒಮ್ಮೆ ನಿನ್ನದರಗಳ
ಕದ ಸ್ವಲ್ಪ ತೆರೆ
ನನ್ನದರಗಳಿಗೆ ಬಾಯಾರಿಕೆ
ಧಣಿವಾರಿಸಿ ಕೊಳ್ಳುವೆ !
ನಲ್ಲೆಯೆಂದಳು ತುಸು ಮೆಲ್ಲಗೆ
ಹೊತ್ತು ಗೊತ್ತಿಲ್ಲವೇ ನಿಮಗೆ
ನಾ ಒಲ್ಲೆ ಒಲ್ಲೆ ಎಂದರೂ
ಬಿಡದೆ ನಡು ಬಳಸುವಿರಿ
ನನ್ನೊಳಗೂ ಕಿಚ್ಚ ಹಚ್ಚುವಿರಿ
ಮರು ಮಾತಾಡದೇ ಮುತ್ತಿಟ್ಟಳು !

ನಾನೇ ಬೇರೆ

ನಿನ್ನೀ ಹುಡುಗಾಟಕ್ಕೆ
ಹುಚ್ಚೆದ್ದು ಕುಣಿವ
ಹುಡುಗಿ ನಾನಲ್ಲ !
ನನ್ನೀ ಮನಕೊಪ್ಪದ
ಯಾವುದೇ ಕೆಲಸವ
ನಾ ಎಂದೂ ಮಾಡಲ್ಲ !

ನೀ ಕರೆದೆ ಎಂದು
ನಾ ಎಲ್ಲೆಲ್ಲಿಗೋ
ನಿನ್ನ ಜೊತೆ ಬರಲು
ಈ ಮನ ಎಂದೂ ಒಪ್ಪಲ್ಲ !
ಪೂರ್ವ ಕಾಲದ ಪುಟ್ಟಕ್ಕ
ಎಂದರೂ ಸರಿಯೇ
ಹದಿನಾರಾಣೆಯ ಅಚ್ಚ
ಸಂಸ್ಕೃತಿಯ ಕನ್ನಡತಿ !

ಮದುವೆಗೆ ಮೊದಲೇ
ರೀತಿ ನೀತಿ, ನಿಯಮಗಳ
ಗಾಳಿಗೆ ತೂರಿ, ಹಲ್ಕಿರಿದು
ಮನಸೋ ಇಚ್ಚೆ ಚಕ್ಕಂದಕ್ಕಾಗಿ
ಹಾಡಿ ನಲಿದಾಡುವ ಹೆಣ್ಣಂತೂ ಅಲ್ಲ !

ನನ್ನ ನೀ ಗಂಡುಬೀರಿ
ಸುಂಟರ ಗಾಳಿ, ಬಜಾರಿ
ಎಂದು ಕರೆದರೂ ಸರಿಯೇ !
ನಂಬಿಕೆ, ಅಪನಂಬಿಕೆಗಳ
ಪ್ರಶ್ನೆಗಳ ವಿಷಯವದಲ್ಲ
ನಿನ್ನ ಬಗ್ಗೆ ಗೌರವವಿದೆ
ನನ್ನ ಸಮ್ಮತಿಯ ಒಲವಿದೆ !

ಕಾಲ ಪಕ್ವವಾಗುವರೆಗೂ
ನೀ ನನಗಾಗಿ ಕಾಯಬೇಕು
ಇದು ನನ್ನ ಹಟವಲ್ಲ, ಛಟವಲ್ಲ
ಮನದಾಳದ ವಿನಮ್ರ ವಿನಂತಿ !
ತೊಲಗಲಿ ನಿನ್ನಲ್ಲಿರುವ ಬ್ರಾಂತಿ !

Thursday, May 16, 2013

ತಾಯೇ ನಿನಗಿದು ಸರಿಯೇ ?

ಯಾರದೋ ತೀಟೆಗೆ ಹುಟ್ಟಿದವಳು ಎನ್ನುತಿಹರು ಹೊತ್ತೆತ್ತು ಮುದ್ದಿಸದೆ, ದೇವಸ್ಥಾನದ ಬಳಿ ಬಿಟ್ಟು
ಓಡಿ ಹೋಗುವ ಮುನ್ನ, ನನ್ನ ಅಳು ಹಸಿವು ನಿನಗೆ
ಕೇಳದಾಯ್ತೇ, ಕೆಂಜಿರುವೆಗಳು ಮುತ್ತಿ ಕಚ್ಚುವಾಗ

ನೊಣ ಹುಳ ಹುಪ್ಪಟೆ ಮೈ ಮೇಲೆಲ್ಲಾ ಹರಿವಾಗ
ನಿನ್ನ ಕರಳು ಚುರ್ ಎನ್ನದೇ, ಕೊರೆವ ಚಳಿಗೆ ಮೈ ನಡುಗೀತೆಂದು ಕಣ್ಣಲ್ಲಿ ಒಂದಿನಿತು ಕಂಬನಿಯು ಬರಲಿಲ್ಲವೇ, ಅವನ ಮೇಲಿನ ಕೋಪದಾ

ರೋಷಕ್ಕೋ ಅಥವಾ ಮದುವೆಗೆ ಮೊದಲೇ ನೀ ತಾಯಾದೆಯಂದೋ, ಲೋಕದಾ ಅಪವಾದಕ್ಕೆ ಹೆದರಿ, ಆ ಕುಂತಿ ತನ್ನ ಕರುಳ ಕುಡಿಯ ನೀರಲ್ಲಿ ಬಿಟ್ಟಂತೆ ನೀನೂ ಅವಳಂತೆ ಅನುಸರಿಸಿದೆಯೋ

ನನ್ನ ಕೊಲ್ಲಬಹುದಿತ್ತಲ್ಲ, ಅನಾಥಳನ್ನಾಗಿಸಿದೆ ಮತ್ತೊಂದು ನೀ ಮದುವೆಯಾದೆಯೋ ಹೇಗೆ !
ಜಗದ ಕಲ್ಯಾಣಕ್ಕೆ ಋಷಿ ಮುನಿಗಳ,ತಾಪ ತಪವ ಕೆಡಿಸಿಲು ದೇವಾನು ದೇವತೆಗಳು ಅಪ್ಸರೆಯರ

ಕಳುಸಿ ಭಂಗಗೊಳಿಸುತಿದ್ದರು, ಹಾವಾ- ಭಾವದಿ ನರ್ತಿಸಿ; ಶೃಂಗಾರ ಲೀಲೆಗಳಿಂದ ಅಂಗಾಂಗಗಳ ಸ್ಪರ್ಶಿಸಿ, ಮೈಮನಸ್ಸಗಳ ಉದ್ರೇಕಿಸಿ ಮೈಥುನಕೆ ಪ್ರಚೋದಿಸಿ ವೀರ್ಯ ಸ್ಖಲನಗೊಂಡರೂ  ಬಿಡದೆ ಕಾರ್ಯ ಸಾಧಿಸುತ್ತಿದ್ದರು; ನಿನಗಾವ ಕಾರ್ಯವಿತ್ತು  

Tuesday, May 14, 2013

॥ ವೈದ್ಯೋ ನಾರಾಯಣೋ ಹರಿ ॥


ಒಂದೇ ಸಮನೆ ಕಾಲಿಂಗ್ ಬೆಲ್ಲು
ನಿಲ್ಲದೆ ಬಿಟ್ಟು ಬಿಟ್ಟು ಬಡಕೊಳ್ತಿತ್ತು
ನೋಡ ಬಾರದೇ, ಹೋಗಿ ಬಾಗಿಲು
ತೆಗೀ ಬಾರದೇ, ನನ್ನವಳ ಎಚ್ಚರಿಸಿದೆ !

ನನ್ನ ತಮ್ಮ ನೈಟ್ ಶಿಫ್ಟ್ ಮುಗಿಸಿ
ಈ ಸರಿ ಹೊತ್ತಲ್ಲಿ ಬಂದಿರ ಬೇಕು
ನನ್ನವಳು ಎದ್ದೋಗಿ ಬಾಗಿಲು ತೆಗೆದು
ಜೋರು ದನಿಯಲಿ ಹೇಳುತ್ತಿದ್ದಳು !

ಇದು ಡಾಕ್ಟರ್ ಮನೀಯಲ್ಲರ್ರೀಯಪ್ಪ
ಸಂಸಾರಸ್ತರ ಮನೀಯೋ ನೀವ್ ತಪ್
ತಿಳ್ದ ಈ ಕಡಿ ಬಂದ್ ತ್ರಾಸ ಕೊಡಬ್ಯಾಡ್ರೀ
ಲಗೂನ ವಯ್ರೀ ನಿಮ್ ಕೂಸ್ನ ಬೇರೇಕಡಿ

ಏ ಸುಮ್ಕಿರ್ರೀ ಅವ್ವಾರೇ, ನಾ ಆ ಬೋರ್ಡ್
ಓದಿ ಬೆಲ್ ಮಾಡಿದ್ದೂ, ನನ್ಗ ತಿಳಿಯಾಕ್ಲಿವ
ಡಾಕ್ಟರ್ ನರಹರಿರಾವ್ ಅದೆನ್ತೋದೊ ತಜ್ಞರು
ಲಗೂನೆ ಡಾಕ್ಟರ್ ನ ಕರ್ಕೊಂಡು ಬರೋಗ್ರೀ !

ಇವರ ಕೂಗಟದಿಂದ ನನಗೂ ಎಚ್ಚರವಾಗಿ
ಎದ್ದು ಬಂದಿದ್ದೆ, ನಮಸ್ಕಾರ್ರೀಯಪ್ಪ ನನ್ಮಗೂಗೆ
ಶ್ಯಾನೆ ಉಸಾರಿಲ್ಲರ್ರೀ , ಲಗೂನೆ ನೋಡ್ರಲ ಇರೋನೊಬ್ಬನೆ ಗಂಡು ಕೂಸು ಕಾಪಾಡ್ರಲ

ಇಲ್ಲಪ್ಪ ನಾ ಡಾಕ್ಟರ್ ಅಲ್ಲೋ ಮಾರಾಯ
ಎಷ್ಟು ಪರಿಪರಿಯಾಗಿ ಹೇಳಿದರೂ ಕೇಳದವ
ಒಮ್ಮೆಲೇ ಮಚ್ಚು ತೆಗೆದು, ಎಳನೀರ್ ಕೊಚ್ಚೋ ಮನುಷ್ಯಾರ್ರೀ ನೀವ್ ಉಳಿಸ್ಲಿಲ್ಲಾಂದ್ರೆ ಈ ಮಚ್
ನಿಮ್ ಎದಿಮ್ಯಾಲಿ ಇರ್ತದೆ ಉಸಾರ್.......!!!!

ನನಗೋ ಇತ್ತ ದರಿ, ಅತ್ತ ಪುಲಿ ಎಂಬಂತ್ತಾಗಿತ್ತು
ಪಿ.ಹೆಚ್.ಡಿ ಮಾಡಿ, ಡಾಕ್ಟರೇಟ್ ಗರಿ ನನಗಿದ್ದರು ಡಾಕ್ಟರ್ ಅಲ್ಲದ ನಾ ಏನು ಮಾಡಲು ಸಾಧ್ಯವಿತ್ತು
ಇಲ್ಲಿ ನಾ ಸೋತು ಸುಣ್ಣವಾಗಿದ್ದೆ !

ನನ್ನ ಮೊರೆಯು ಆ ದೇವರಿಗೆ ಕೇಳಿಸಿರ ಬೇಕು
ನನ್ನವಳು ನಿಮ್ಮಣ್ಣನಿಗೆ(ನನಗೆ) ಹುಶಾರಿಲ್ಲವೆಂದು ಎರಡು ದಿನಗಳ ಮೊದಲೇ ಅವಳಿಗೆ ತಿಳಿಸಿದ್ದಳೆನ್ನಿ ಡಾಕ್ಟರ್ ಆದ ನನ್ನ ಮಗಳು ಜೀವ ಉಳಿಸಿದಳೆನ್ನಿ

Monday, May 13, 2013

ನನ್ನ ಕಾಪಾಡಿದ ಭೂತಜ್ಜ

ಹೀಗಿರುವಂತೆ ಮೊದಲೆಲ್ಲಾ
ಬಸ್ಸು ಮೋಟಾರ್ ಸೈಕಲ್ಲು;
ಮೊಬೈಲ್ ಫೋನ್ ಇರಲಿಲ್ಲ
ಊರಿಂದ ಊರಿಗೆ ಹೋಗಲು
ಎತ್ತಿನ ಗಾಡಿಯೋ, ಜಟಕಾ ಬಂಡಿಯೋ
ನಡೆದೋ, ಇಲ್ಲಾ ಸೈಕಲ್ ತುಳಿದೋ
ಹೋಗ ಬೇಕಿತ್ತು, ಗುರಿ ಮುಟ್ಟ ಬೇಕಿತ್ತು !

ಅಮ್ಮ ಬೇಡವೆಂದರೂ, ಒಂದು ಬೆಳ್ಳಂ ಬೆಳಗ್ಗೆ
ಸ್ನೇಹಿತನ ಮುದ್ದು ತಂಗಿಯ ಮದುವೆಗಾಗಿ
ಎರಡು ದಿನ ಇರುವಾಗಲೇ ನಾ ಹೊರಟೆ
ಅಮ್ಮಕಟ್ಟಿ ಕೊಟ್ಟಿದ್ದ ರಾಗಿಯ ರೊಟ್ಟಿ
ಹುಚ್ಚೆಳ್ಳು ಚಟ್ನಿ, ಗಟ್ಟಿ ಮೊಸರಿನ ಬುತ್ತಿಯ
ಚೀಲ ಕ್ಯಾರಿಯರಲ್ಲಿ ಹಾಯಾಗಿ ಕುಳಿತಿತ್ತು !

ಅಷ್ಟೇನು ಬಿಸಿಲಿಲ್ಲದೆ ಹಾಯಾಗಿ ಸೈಕಲ್ಲು
ತುಳಿದು, ಹತ್ತಾರು ಮೈಲುಗಳ ಕ್ರಮಿಸಿ
ನಡು ನತ್ತಿಗೆ ಸೂರ್ಯ ಬಂದು ನಿಂತಾಗಲೇ
ಆಯಾಸ ಗೊತ್ತಾಗಿದ್ದು, ಮುಂದೆ ಎಲ್ಲಾದರೂ
ನೀರು ಕಂಡರೆ, ಬುತ್ತಿ ಬಿಚ್ಚೋಣವೆಂದು ಕೊಂಡು
ಯೋಚಿಸುವಾಗಲೇ ನಡೆಯಲಾರದೆ ಅಜ್ಜನೊಬ್ಬ
ಅಲ್ಲಿಯೇ ಕುಸಿದು ಬಿದ್ದಾಗ ಕನಿಕರಿಸಿ ಮೇಲೆತ್ತಿದ್ದೆ !
ನೀರ ಕುಡಿಸಿ ಉಪಚರಿಸಿ, ತಂದ ಬುತ್ತಿಯಲ್ಲೇ
ಇಬ್ಬರೂ ಹಂಚಿ ತಿಂದು, ಸೈಕಲ್ಲಲ್ಲಿ ಕರೆದ್ಯೋದೆ !

ಏನ್ ಅಜ್ಜಾ...ನೀ ಇಷ್ಟೊಂದು ಭಾರವೇ
ಸೈಕಲ್ ತುಳಿಯೋಕೆ ಕಷ್ಟ ಹಾಗ್ತ ಇದೇ
ಒಳ್ಳೇ ಹೆಣ ಹೊತ್ತೋರ ಭಾರದಂತಿದೆ
ನೀನ್ ನೋಡ್ದರೆ ಗಾಳಿಗೆ ಹಾರೋಗೋ
ಕಡ್ಡಿಯ ತರ ಇದ್ದೀಯ ಏನ್ಮಾಡ್ಲಿ ತಾತ
ತುಂಬಾ ಕಷ್ಟ, ಈಗ ತುಳಿಯೋ ಮೊಮ್ಮಗನೇ
ನನಗೋ ಆಶ್ಚರ್ಯ, ಗಾಳಿಯಲ್ಲಿ ತೇಲಿದನುಭವ !

ದೂರದಲ್ಲೆಲ್ಲೋ ಒಂದು ಹೆಣ್ಣಿನ ಮಧುರವಾದ
ಹಾಡಿನ ತರಂಗ ಮೈಮನ ಸೆಳದಿತ್ತು, ಈ ಹಾಡೇ
ಇಷ್ಟು ಇಂಪಾಗಿರ ಬೇಕಾದರೆ ಇನ್ನು ಹಾಡುವ ಆ
ಹೆಣ್ಣು ಎಷ್ಟು ಅತಿ ಸುಂದರಿಯಾಗಿರ ಬೇಕು !!!

ಎದುರು ಬರುತ್ತಿದ್ದವಳ ಕಂಡು, ಒಂದು ಕ್ಷಣ ನಾನೇ
ಧಂಗಾಗಿ ಹೋಗಿದ್ದೆ, ಅವಳ ಅಪ್ರತಿಮ ರೂಪ
ಸೌಂದರ್ಯ ರಾಶಿಯ ನಾ ಎಲ್ಲೂ ಕಂಡಿರಲಿಲ್ಲ !
ತುಂಬು ಏರು ಜವ್ವನೆ, ಒಮ್ಮೆ ನೋಡಿ ನಕ್ಕಳಷ್ಟೇ
ಎದೆಯೊಳಗೆ ನೂರಾರು ಮಿಂಚು ಬೆಳಗಿ ಒಮ್ಮೆಲೇ ಮರೆಯಾಗಿತ್ತು, ಮುಂದೆ ಹೋದವನು ನಿಲ್ಲಿಸಲು,
ನೀ ಬೇಡ ಕಂದಾ ಬೇಡ ಎಲ್ಲಿಯೂ ನಿಲ್ಲಿಸ ಬೇಡ
ಆ ಮಾಯಾವಿ ಹೆಣ್ಣಲ್ಲ , ದೆವ್ವ !!??

ನಿನಗೇಗೆ ಗೊತ್ತು ಅಜ್ಜಾ, ಅವಳು ಹೆಣ್ಣಲ್ಲ ದೆವ್ವವೆಂದು
ಅಯ್ಯೋ ನನ್ನ ಕಂದ ನಾನು ನಿನ್ನ ಪೂರ್ವಿಕನೋ
ನಾನು ಸಹ ಅದರಂತೆ ನಿನ್ನ ಕಾಪಾಡಲು ಬಂದ ದೆವ್ವ

ಹೀಗೊಂದು ಕನಸು

ಬೆಳ್ಳಂ ಬೆಳಿಗ್ಗೆಯೇ
ಬುಡ ಬುಡಕೆಯವನು
ಮನೆ ಮುಂದೆ ಬಂದು
ಒಂದೇ ಸಮನೇ
ಬಾಯ್ ಬಡಕ್ಕೋತ್ತಿದ್ದ
ಬಿಟ್ ಬಿಡಿ, ಬಿಟ್ ಬಿಡಿ
ಬರೆಯೋದೆಲ್ಲಾ ನೀವು
ಈಗ್ಲಿಂದಲೇ ಬಿಟ್ ಬಿಡಿ
ಇಲ್ಲಾಂದ್ರೆ ತಲೆಯಲ್ಲಾ
ಕೆರಕ್ಕೊಳ್ಳಕ್ಕೂ ಕೂದ್ಲು
ಇನ್ಮುಂದೆ ಇರೋಂಗಿಲ್ಲ !
ನನ್ಗೆ ಮೈಯೆಲ್ಲಾ ಕೋಪ
ನೆತ್ತಿಗೇರಿ, ಕುತ್ಗೆ ಹಿಡಿದು
ಏಯ್ ಬುಡ್ ಬುಡ್ಕೇನೇ
ಸಾಕ್ ನಿಲ್ಸಯ್ಯ, ನಿನ್ನ ವರಸೆ
ಏನೋ ಅಲ್ಲೊಂದಿಲ್ಲೊಂದು
ನನ್ನ ಇಷ್ಟಕ್ಕೆ ಬರ್ಕೋತಿನಿ
ನನ್ನ ಮನೆ ಮುಂದೆ ಬಂದು
ಬುಟ್ ಬಿಡಿ ಅಂತ ಹೇಳಕ್ಕೆ
ನಿನಗೆಷ್ಟು ಧೈರ್ಯನಯ್ಯ
ನೀನ್ ಯಾವೂರ ದಾಸಯ್ಯ
ಹೋಗಯ್ಯ, ಇಲ್ಲಿಂದ ಎಂದು
ನನ್ನವಳ ಹಾಸಿಗೆಯಿಂದ ಕೆಳಕ್ಕೆ
ತಳ್ಳುತ್ತಿದ್ದೆ, ನನ್ನವಳು ಕೋಪದಿಂದ
ರ್ರೀ.....ಹೇಳ್ರೀ.. ಬೆಳಗಾಯ್ತು, ಏನ್
ಕನಸ್ಸ್ ಕಾಣ್ತೀರೋ ಆ ದೇವರಿಗೇ ಗೊತ್ತು
ಎದ್ದೋಗಿ ರಾತ್ರಿ ಬಿದ್ದಿರೋ, ರಾಶಿ ಪಾತ್ರೆ
ತೊಳ್ದು, ಬೇಗ ಕಾಫೀ ತಗೊಂಡ್ ಬನ್ರೀ...!!

Monday, May 6, 2013

" ಅನುಮಾನ "

ನನ್ನವಳಿಗೇಕೋ ಇತ್ತೀಚೆಗೆ
ನನ್ನ ಮೇಲೆ ಅನುಮಾನ !
ನಿಮಗೂ ನನ್ಮೇಲೆ ಅನುಮಾನವೇ?
ಕಳೀ ಬೇಡಿ ಸ್ವಾಮೀ ನನ್ನ ಮಾನ !
ನಾನವನಂತವನಲ್ಲ !

ಏನೋ ಬರುವುದು ಸ್ವಲ್ಪ ಲೇಟು
ಅಲ್ಲೇ ಒಂಚೂರ್ ತಿಂದು, ಕುಡಿದು
ಸುಧಾರಿಸಿ ಕೊಂಡು ಮನೆಗೆ ಬರೋದು
ನಿಮಗೆ ಗೊತ್ತಿದೆಯಲ್ಲ, ಈ ಟ್ರಾಫಿಕ್
ಸಿಗ್ನಲ್ಲು ಹಾಳಾದ ರಸ್ತೆ !

ಛೆ ಛೇ ಮಾನಿನಿ ಮದಿರೆ ಅವೆಲ್ಲ
ನನಗಂತೂ ಇಲ್ಲವೇ ಇಲ್ಲ ಬಿಡಿ,
ಮುದ್ದಾದ ಮತ್ತೇರಿಸುವ ಮಡದಿಯಿರೆ
ಮನೆಗೆ ಬರದೆ ಮತ್ತೆಲ್ಲಿಗೆ ಹೋಗಲಿ ಹೇಳಿ ?
ಸ್ನೇಹಿತರ ಅಡ್ಡದಲ್ಲಿ ಅಡ್ಡಾಡಿದವನಲ್ಲ !

ಆದರೂ ಇವಳಿಗೇಕೆ ಬಂತು ಅನುಮಾನ !
ನಾ ಅಂತವನಲ್ಲ ಎಂಬುದವಳಿಗೂ ಗೊತ್ತು
ಯಾರು ಸುರಿದರೋ ಅವಳ ಮೃದು ಮನಕೆ 
ಅನುಮಾನದ ಒಗ್ಗರಣೆಯ ಬಿಸಿಯ ತುಪ್ಪ!
ಮಾತಿಲ್ಲ ಕತೆಯಿಲ್ಲ, ನೋಟವೂ ಇಲ್ಲ !

ಹೋಗಲಿ ಬಾಯ್ಬಿಟ್ಟು ಹೇಳ ಬಾರದವಳು
ಮಕ್ಕಳ ಮೇಲೆ ಪ್ರತಾಪ ರೌದ್ರಾವತಾರ !
ನನಗೂ ಸಾಕಾಗಿತ್ತು, ಇವಳಾರ್ಭಟ ಕಂಡು 
ಮದುವೆಯ ವಾರ್ಷಿಕೋತ್ಸವವು ಬೇಡೆಂದು
ಮಗಳು ಬಿಲ್ಲು ತಂದಿತ್ತಾಗಲೇ ಗೊತ್ತಾಗಿದ್ದು !

ನನ್ನವಳ ಕೊರಳಿಗೆ ರತ್ನ ಖಚಿತ ಮಾಲೆ 
ಕೈಗಳಿಗೆರಡೆರುಡು ಬಂಗಾರದ ಕಲ್ಬಳೆ
ಆಶ್ಚರ್ಯ ಪಡಿಸೋಣವೆಂದು ಹಾಗೆ ಇಟ್ಟು, 
ವಾರ್ಷಿಕೋತ್ಸವದಂದು ಕೊಡೋಣವೆಂದು
ಇಷ್ಟೆಲ್ಲಾ ಅನುಮಾನಗಳಿಗೆ ಕಾರಣನಾಗಿದ್ದೆ !