Sunday, May 25, 2014

" ಕದ್ದವರು ಯಾರು "....?

ಹೂವಿನ ಕರಗ ಬಂತೆಂದು ಜನ,
ಗೋವಿಂದ ಗೋವಿಂದ ಗೋ... ವಿಂದ
ನೂಕುನುಗ್ಗಲಿನ ತಳ್ಳಾಟದಿ
ಜೋರಾಗಿ ಢೀ ಕೊಟ್ಟಿದ್ದಲ್ಲದೆ
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸರ್
ಅದು ಅದು... ಯಾರೋ... ಹಿಂಬದಿಯಿಂದ ತಳ್ಳಿದರು
ಹಾಗಾಗಿ ನಿಮ್ಮ ಮೇಲೆ ಬಿದ್ದೆ ವೆರಿ ಸಾರಿ
ನಗುತ ಆ ಜನ ಜಂಗುಳಿಯಲ್ಲಿ ಮಾಯವಾದವಳ
ಆ ಮುದ್ದು ಮುಖ ಮತ್ತೇ.. ಕಣ್ಮುಂದೆ ಬಂದು
ಹಾಗೇ... ಮೈಮರೆತವನ, ಒಳ ಮನಸ್ಸು ಎಚ್ಚರಿಸಿ
ಪ್ಯಾಂಟ್ ಜೇಬಿಗೆ ಕೈ ಹಾಕಿದಾಗಲೇ... ಗೊತ್ತಾಗಿದ್ದು
ಜೇಬು ಖಾಲಿ ಖಾಲಿ, ಪರ್ಸ್ ಮಂಗಮಾಯ
ಆ ಮುದ್ದು ಮುಖದ ಹುಡುಗಿ ಕದ್ದೋದಳೇ....?
ಅಥವಾ ಆ ಮಂಗಳ ಮುಖಿಯರ ಗುಂಪೆ...!?
ಎಷ್ಟು ನಾಜೂಕಾಗಿ ಹಿಂಬದಿಗೆ ಬಡಿದು
ಅರೇ.... ಮಾಮೂ.... ತೆಗಿ ತೆಗಿ ದುಡ್ಡು
ಅವರಿಗೇನ್ಗೊತ್ತು ನಾ ಮಫ್ತಿಯಲ್ಲಿರುವ ಪೊಲೀಸ್ಸೆಂದು
ಏಯ್ ... ಸಾಹೇಬ್ರ ಹತ್ರಾನೆ ನಿಮ್ ರೋಲ್ ಕಾಲ
ಹೂಂ... ಹೊರಡಿ ಇಲ್ಲಿಂದ ಲಾಠಿ ಬೀಸಿದ್ದ ಪೀಸಿ....

No comments:

Post a Comment