Friday, March 18, 2022

ಯಾರಿವಳು ?

ಎಕ್ಸಟ್ರೀಮ್ಲೀ.... 
ವೆರಿ ವೆರಿ ಸಾರಿ ಡಿಯರ್
ಈಗಷ್ಟೇ ನನಗೂ ವಿಷಯ ಗೊತ್ತಾಗಿದ್ದು, 
ನಿಮ್ಮೀ ಸ್ಥಿತಿಗೆ ಅಳಬೇಕೋ, ನಗಬೇಕೋ 
ನೋಡಲು ಬರೋಣ ಎಂದರೆ
ನಿಮ್ಮ ಅಡ್ರೆಸ್ಸೇ... ಗೊತ್ತಿಲ್ಲ
ನಾ ಇದ್ದದ್ದರೆ ಆ ಕತೆಯೇ 
ಬೇರೆಯೇ ಇರುತ್ತಿತ್ತು.
ಆ ಇಬ್ಬರು ಹೆಂಡತಿಯರು ಅಷ್ಟೊಂದು 
ಮುಖ ಮೂತಿ ನೋಡದೆ
ಚಚ್ಚುವಾಗ ನನ್ನ ನೆನಪಾಗಲಿಲ್ಲವೆ?  
ನಾ ಹೆಚ್ಚೋ... ನೀ ಹೆಚ್ಚೋ... ಎಂದು 
ಪೈಪೋಟಿಗೆ ಬಿದ್ದು ಹೊಡೆದಿರಬೇಕು. 
ಕಾಲು ಮುರಿದದ್ದೋ..., ಅಥವಾ
ನಿಮ್ಮ ಹಲ್ಲನ್ನೊ
ದುಃಖ ತಡೆದುಕೊಳ್ಳುವ ಶಕ್ತಿ 
ಆ ಭಗವಂತ ಕೊಡಲಿ,
ಮುರಿದ ನಿಮ್ಮ ಮೂರು ಹಲ್ಲುಗಳಿಗೆ 
ಇನ್ಶ್ಯೂರೆನ್ಸ್ ಆದರು ಇದ್ದಿದ್ದರೆ
ಕ್ಲೈಮ್ ಮಾಡಬಹುದಿತ್ತು.

ಯಾರಿವಳು?!
ಪರಿಚಯದವಳೂ ಅಲ್ಲ,
ಸಂಬಂಧಿಕಳೂ ಮೊದಲೇ ಅಲ್ಲ
ಬಂದ ಕೋಪಕ್ಕೆ ಯಾರ್ರೀ ನೀವು?
ನೀವೇನು Btvಯವರ,
ಅಥವಾ ಬೆನ್ನಿಗೆ ಬಿದ್ದಿರುವ ಬೇತಾಳನ
ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು
ಹಾಳದವಳು ಕೂಲಾಗಿ 
ನಾ ನಿಮ್ಮ ಕನಸು ಎನ್ನಬೇಕೆ ?
#ಶಿವಚೆನ್ನ

Wednesday, April 22, 2020

ಪುಣ್ಯಾತ್ಗಿತ್ತಿ

ನನ್ನವಳು ನಿದ್ದೆಗಣ್ಣಲ್ಲೇ
ಆಕಳಿಸುತ್ತಾ, ಮೈಮುರಿದು
ನಾನ್ ಎದ್ದು ರೆಡಿಯಾಗಿ ಬರೋದ್ರೊಳಗೆ
ಟಿಫಿನ್ ರೆಡಿಯಾಗಿದ್ರೆ ಸರಿ 
ಇಲ್ಲಾಂದ್ರೆ ಗೊತ್ತಲ್ಲ;
ಅವಳು ಕೆದರಿದ ತಲೆಗೂದಲು 
ಕೆಂಪನೆಯ ಕಣ್ಣು ನೋಡಿಯೇ,
ಭಯಕೆ ಮಾತು ಬರದೆ ನಾ ನಿಂತಿದ್ದು ನೋಡಿ
ಜುಟ್ಟಿಡಿದು ತಿರುಗಿಸಿದ ರಭಸಕ್ಕೆ
ಪ್ರಾಣ ಕೈಗೆ ಬಂದಿತ್ತು.

Wednesday, February 5, 2020

ನೀ ಏನೆ ಹೇಳು

ಮನದೊಳಗೆ, 
ಮುಂಗಾರಿನ ಮಳೆಗೆ
ಮೇಳೈಸಿದೆ
ಕರಿಮುಗಿಲುಗಳ ಸಾಲು;
ನಿನ್ನ ಕಣ್ಸನ್ನೆಯ ಮಿಂಚಿಗೆ
ನಗೆಯಬ್ಬರದ ಗುಡುಗಿಗೆ,
ಗುನು ಗುನುಗುತ
ನರನಾಡಿಗಳಲಿ
ಉಲಿ ಉಲಿಯುತ 
ಅಲೆಯಲೆಯಾಗಿ
ಆವರಿಸಿದೆ ನನ್ನನ್ನೇ.... 

" ಈ ಪ್ರೀತಿ ಒಂಥರಾ ನಶೆಯ ರಾಣಿ "

ನೀ ಮುತ್ತಿಟ್ಟ ಮರುಘಳಿಗೆ
ನನ್ನದರಗಳಿಗೂ ಮೆರವಣಿಗೆ
ಕನಸುಗಳಿಗೂ ಏಕೊ ಕನವರಿಕೆ
ಧಣಿವಾಗದು ಎಂದೆಂದಿಗೂ
ಮನ ಹುಚ್ಚೆದ್ದು ಕುಣಿದಾವು
ಮುಚ್ಚಿಟ್ಟರು, ಬಚ್ಚಿಟ್ಟರು
ಗರಿಗೆದರಿ ನಾ ಹಾರಲೇ
ನೀ ....  ಹೇಳೆ ಗೆಳತಿ
ನನ್ನೊಳಗೂ ನಿನ್ನಂತೆಯೇ
ನೀಲಾಂಬರದ ಕೊನೆಗೂ
ಗುರಿ ಮುಟ್ಟುವ ತವಕ
ಮೈಮನ ಪುಳಕ ಅಲ್ಲವೇನೆ. 

Monday, February 3, 2020

ಮುಷ್ಕರ

ನನ್ನವಳ ಖುಷಿಗೆ 
ಕಾರಣ ಏನೆಂದು ಗೊತ್ತಾಗದೆ,
ನಾನಿಲ್ಲಿ ಒದ್ದಾಡುತ್ತಿದ್ದರೆ
ಒಬ್ಬರಾದರು ಬಾಯಿ ಬಿಡಬಾರದಿತ್ತೆ
ಇಂದು ವಿಶೇಷವೇನಿರಬಹುದು ? 
ಜನುಮ ದಿನ, ಮದುವೆ ವಾರ್ಷಿಕೋತ್ಸವ 
ಅಲ್ಲವೇ... ಅಲ್ಲ
ಹಾಳಾದ್ದು ಒಂದೂ ನೆನಪಿಗೆ ಬರದೆ
ನೆನಪುಗಳು ಮಂಡಿಯೂರಿ 
ಇಂದೇ ಮುಷ್ಕರ ಹೂಡಬೇಕಿತ್ತೆ ;
ಎಲ್ಲವೂ... ಗೊಜಲು ಗೊಜಲು 
ಏನೆಂದು ನನ್ನವಳ ಕೇಳಲಿ ?
ಕೇಳಲೂ ಏಕೋ ಸಂಕೋಚ  
ನನ್ನೊಳಗಿನ ಭಯಕೆ ಹೆದರಿ
ಗೊಂದಲದಲ್ಲಿದ್ದ ನನ್ನೆಡೆಗೆ ಒಮ್ಮೆ ನೋಡಿ 
ಕಣ್ಣು ಮಿಟುಕಿಸಿ, ಹಾಗೆ ಹೋದವಳ ಬಿಡದೆ 
ಸೊಂಟ ಬಳಸಿ ಬಿಡಬೇಕಿತ್ತು
ಆಗಲಾದರು ನಿಜ ಹೇಳುತ್ತಿದ್ದಳೇನೋ... 

Saturday, February 1, 2020

ಕಾವ್ಯಧಾರೆ

ನನ್ನೀ ಬರಡು ಎದೆಯೊಳಗೆ 
ಅದೇಕೋ ಪ್ರತಿ ಪದಗಳಿಗೂ ಮುಷ್ಕರ
ಹಾಳಾದ್ದು ಹೊರ ಬರದೆ ಎಲ್ಲೋ.. ಅಡಗಿ
ಮಿಡುಕಾಡಿ, ತಿಣುಕಾಡಿ ಇಣುಕಿದವೇ ವಿನಃ
ಒಂದೂ ಹೊರಬರಲೇ.... ಇಲ್ಲ;
ನೀನೊಮ್ಮೆ ಬಂದು ಹೋದರೆ
ನಿನ್ನ ನೂಪುರದ 
ಪ್ರತಿ ಹೆಜ್ಜೆಯ ಗೆಜ್ಜೆಯ ಸದ್ದಿಗೆ
ಭೋರ್ಗರೆಯುವ ಜಲಪಾತದ ಹಾಗೆ
ಉಕ್ಕಿ, ಧುಮ್ಮಿಕ್ಕುತ
ಅಂಕು ಡೊಂಕುಗಳ 
ಒಳಸುಳಿಗಳ ಛೇದಿಸಿ, ಭೇದಿಸಿ 
ನುಸುಳಿ ಬಂದಾವು  
ಭಾವದೊಲುಮೆಯ ಜೊತೆಗೂಡಿ
ಕಾವ್ಯಧಾರೆ.

ಕೊರಡು

ನಿನ್ನ ನೂಪುರದ 
ಪ್ರತಿ ಹೆಜ್ಜೆಯ ಸುದ್ದಿಗೆ
ಧಿಡೀರನೆ ಎಚ್ಚರಗೊಳ್ಳುವ 
ನನ್ನೀ ಮನಸ್ಸು
ಒಮ್ಮೊಮ್ಮೆ ನಿರ್ಜಿವ 
ಕೊರಡಿನಂತೆ