Sunday, June 19, 2016

" ಕಾಕಾಯಣ "


ಕಾಗೆ ತಾನೆ ಏತದ್ದು
ಹೋಗಲಿ ಬಿಡು,
ಅದೇನು ತೋಳೆದರೆ ಹೋಗದೆ
ನೀ ಏನೂ ಮಾತಾಡದೆ ಸುಮ್ಮನೆ ಇದ್ದು ಬಿಡು
ನಿನ್ನ ಚಿಕ್ಕಮ್ಮನಿಗೆ ಇದೆಲ್ಲ ಗೊತ್ತಾದರೆ ಮುಗಿಯಿತು 
ಆಕಾಶ, ಭೂಮಿಯೆಲ್ಲ ಒಂದು ಮಾಡಿ
ಅಪಶಕುನ, ಶನಿಪರಮಾತ್ಮ ಹೆಗಲೇರಿದ
ಎಂದೆಲ್ಲ ಹೆದರಿಸಿ;
ತನ್ನೂರಿಗೆ ಹೋಗುವವರೆಗೂ ಗೂಬೆ ಕೂರಿಸದೆ ಹಾಗೆ ಬಿಡರು
ನೀ ಎಂಥಾ !! ...... ಪೆದ್ದಿಯೇ ?
ಅಷ್ಟೆಲ್ಲಾ ಹೇಳಿದರು ನಿನ್ನ ಚಿಕ್ಕಮ್ಮನಿಗೆ ಹೇಳಿರುವೆ
ನೋಡು ಈಗೇನಾಯ್ತು ಕಾರು ಹೋಯ್ತು
ಇನ್ನು ಈ ಜನ್ಮದಲ್ಲಿ ಕಾರು ಏರುವಂತಿಲ್ಲ
ಆದದ್ದೆಲ್ಲಾ ಒಳ್ಳೆಯದಕ್ಕೆಂದು ಕೊಂಡಿದ್ದರೆ
ಅರ್ಧದಷ್ಟು ನಿನ್ನ ಚಿಕ್ಕಮ್ಮನ ಪಾಪ ಪರಿಹಾರವಾಗುತ್ತಿತ್ತು 
ಅಲ್ಲವೇನೇ.... ನಾ ನಗಾಡಿದ್ದೆ

No comments:

Post a Comment