Friday, October 19, 2018

ದಾಸಾನುದಾಸ

ನಾಲ್ಕೈದು
ತಿಂಗಳುಗಳಿಂದ ಒಮ್ಮೆಯೂ
ಬಳಿ ಬರದವಳು
ಇಂದು ಇದ್ದಕ್ಕಿದ್ದಂತೆ ಬಂದಿಹಳು
ಹೂಮಾಲೆ ಹಿಡಿದು
ಮನದ ಮುಂಬಾಗಿಲಿಗೆ.
ಇವಳೆಣಿಸಿದಂತೆ ಎಲ್ಲವೂ
ಆಗಲೇ ಬೇಕೆನೋ.‌..
ಊಹೆಗೂ ನಿಲುಕದೆ,
ನನ್ನ ಲಕ್ ಲೆಕ್ಕಾಚಾರದ ತರ್ಕಕೂ ಸಿಗದೆ
ಕಾಡುವ ಇವಳ
ಅದೆಷ್ಟು ಬಾರಿ ಗೋಗರೆದು
ಕಾಯ ವಾಚ, ಮನಸಾರೆ ಆರಾಧಿಸಿದ್ದೆ
ಎಲ್ಲಿಲ್ಲದ ಬಿಗುಮಾನಕೆ, ಅಸಡ್ಡೆಗೆ
ಠೂ.... ಬಿಟ್ಟುರೂ
ಸೋತು ಬಂದವಳ ಮುಂದೆ
ಮನಸ್ಸು ಮಾತ್ರ ಕುರಿಯ ಮಂದೆ..

1 comment: