ಯುಗಕೆ ಯುಗಾದಿ ಬಂದಿತೆಂದರೆ
ಚೈತ್ರದ ಸಿರಿ ಸೊಬಗು ಈ ಧರೆಗೆ
ಚೈತ್ರದ ಸಿರಿ ಸೊಬಗು ಈ ಧರೆಗೆ
ಸುತ್ತ ಮುತ್ತ ಕಂಡ ಹಸಿರ ರಾಶಿಗೆ
ಸೋಲದಿರದು ಮನ ಸಸ್ಯಕಾಶಿಗೆ
ಹೊಂಗೆ ಹೂವ ನೆರಳ ತಂಪಿನೊಳು
ಮಾವು-ಬೇವು ಸೊಂಪ ಕಂಪಿನೊಳು
ಮಾವು-ಬೇವು ಸೊಂಪ ಕಂಪಿನೊಳು
ಕುಹೂ ಕುಹೂ ಗಾನದ ಇಂಪಿನೊಳು
ಮನವು ಮತ್ತೆಮತ್ತೆ ಹಾಡಿ ಕುಣಿಯದೆ
ವರ್ಷಕ್ಕೊಮ್ಮೆ ಹೊಸತು , ಎನಿತಿನಿತು
ಸೃಷ್ಟಿ-ಸ್ಥಿತಿಯ-ಲಯದ ಬದುಕೊಳು
ಸೃಷ್ಟಿ-ಸ್ಥಿತಿಯ-ಲಯದ ಬದುಕೊಳು
ಪೊರೆಯ ಕಳಚಿ, ಚಿಗುರನುಣಿಸಿ, ಹರಸಿ
ಅರಳಿ ಕೊರಳ ದಬ್ಬಿ,ಸೋಕೊ ಗಾಳಿಗೆ
ನಿನ್ನ ಕಂಡ ಕ್ಷಣದಿ, ಆ ನಿನ್ನ ಪ್ರೀತಿ ಮಳೆಗೆ
ನನ್ನ ಎದೆಯ ನವಿಲು, ಕುಣಿದು ನಲಿಯದೆ
ನನ್ನ ಎದೆಯ ನವಿಲು, ಕುಣಿದು ನಲಿಯದೆ
ಮನಕೆ ಮನೆಗೆ ನೂರು ಹರುಷ ತಂದಿದೆ
ಯುಗದ ಜಗಕೆ ,ನವ ಸಂವತ್ಸರ ಬಂದಿದೆ
ನಿನ್ನ ನಗೆಯ ಪ್ರೀತಿ ಸ್ಪರ್ಷ ಚೈತ್ರದಸಿರು
ಮನದ ಮರಗಳಲ್ಲಿ, ರೆಂಬೆ ಕೊಂಬೆ ಗಳಲ್ಲಿ
ಮನದ ಮರಗಳಲ್ಲಿ, ರೆಂಬೆ ಕೊಂಬೆ ಗಳಲ್ಲಿ
ಚಿಗುರ ಸಿರಿಯು ಹೊಮ್ಮಿ ತುಂಬಿ ಚಿಮ್ಮಿದೆ
ನವ ತಾರುಣ್ಯದ ಲಾಲಿತ್ಯವಎನಗೆ ತಂದಿದೆ
ಬೇವು-ಬೆಲ್ಲವ ಮೆಲ್ಲಲು ಮನ, ಈ ದಿನ
ಜೇನ ನುಡಿಯ ಕೇಳಲು ಪ್ರತೀಕ್ಷಣ ನನ್ನ
ಜೇನ ನುಡಿಯ ಕೇಳಲು ಪ್ರತೀಕ್ಷಣ ನನ್ನ
ಆಸೆ, ಹಾರೊ ಹಕ್ಕಿಯಾಗೆ ಹಾರುವಾಸೆಗೆ
ಗಗನ ಚುಕ್ಕಿ, ಮುತ್ತನಿಕ್ಕಿ ತನುವ ಮರಸಿದೆ
No comments:
Post a Comment