ಮರೆತೆ ನಾನು
ಮನದ ನೋವ
ನಿನ್ನ ಕಂಡ ಕ್ಷಣದಲೇ
ಏಕೊ ಏನೊ ಹೇಳಲಾರೆ
ಎನಿತು ಏನೊ ತಾಳಲಾರೆ
ಹೃದಯದೊಳಗೆ ಹೊಸತನ
ಹಗುರವಾಯಿತೆನ್ನ ಮೈಮನ
ಕರೆದೆ ನೀನು ನನ್ನ
ನಿನ್ನ ತುಂಟ ಕಣ್ಣಿನಲ್ಲೆ
ಮನದ ಮಾತನ್ನೆಲ್ಲ ಹೇಳಲು
ಬರದೆ ನಾನು ಚಿನ್ನ
ನನ್ನ ತುಂಟ ನಗೆಯಲೆ
ನಿನ್ನ ಆಟವಾಡಿಸಿ ಹೊಗಳಲು
ಅರಿತೆ ನೀನು
ಬೆರೆತೆ ನಾನು
ನನ್ನ ಬಳಸಿ ಮೌನ ಮುಖದಿ
ಅಧರ ಸವಿದೆ ನಲಿದೆ ಸುಖದಿ
ನೋವೆ ಬರಲಿ ನಲಿವೆಯಿರಲಿ
ಜಗವ ಗೆದ್ದು, ಸುಖವ ಮೆದ್ದು
ನಗುತ ನಾವು ಬಾಳಿ ಬದುಕುವ
ಮನದ ನೋವ
ನಿನ್ನ ಕಂಡ ಕ್ಷಣದಲೇ
ಏಕೊ ಏನೊ ಹೇಳಲಾರೆ
ಎನಿತು ಏನೊ ತಾಳಲಾರೆ
ಹೃದಯದೊಳಗೆ ಹೊಸತನ
ಹಗುರವಾಯಿತೆನ್ನ ಮೈಮನ
ಕರೆದೆ ನೀನು ನನ್ನ
ನಿನ್ನ ತುಂಟ ಕಣ್ಣಿನಲ್ಲೆ
ಮನದ ಮಾತನ್ನೆಲ್ಲ ಹೇಳಲು
ಬರದೆ ನಾನು ಚಿನ್ನ
ನನ್ನ ತುಂಟ ನಗೆಯಲೆ
ನಿನ್ನ ಆಟವಾಡಿಸಿ ಹೊಗಳಲು
ಅರಿತೆ ನೀನು
ಬೆರೆತೆ ನಾನು
ನನ್ನ ಬಳಸಿ ಮೌನ ಮುಖದಿ
ಅಧರ ಸವಿದೆ ನಲಿದೆ ಸುಖದಿ
ನೋವೆ ಬರಲಿ ನಲಿವೆಯಿರಲಿ
ಜಗವ ಗೆದ್ದು, ಸುಖವ ಮೆದ್ದು
ನಗುತ ನಾವು ಬಾಳಿ ಬದುಕುವ
ತಥಾಸ್ತು ಎಂದರು ಅದೆಷ್ಟೋ ಕೋಟಿ ದೇವತೆಗಳೂ...
ReplyDeleteದೇವಾನು ದೇವತೆಗಳು ನಮ್ಮಿಬ್ಬರ ಪ್ರೀತಿಗೆ ಆಶೀರ್ವದಿಸಿ ತಥಾಸ್ತು ಅಂದರು, ಇವಳಪ್ಪ ಇನ್ನೂ ಹೇಳಲಿಲ್ಲ ಮೂರು ಗಂಟಾಕು ಅಳೀಮಯ್ಯ ಎಂದು. ಅದೇ ನಮ್ಮಿಬ್ಬರಿಗೂ ಚಿಂತೆ.ಧನ್ಯವಾದಗಳು ಪಲವಳ್ಳಿ ಸರ್.
ReplyDeleteಮರೆತೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲಿ... ಈ ಹಾಡು ನೆನಪಾಯಿತು ನಿಮ್ಮ ಸಾಲುಗಳು ಓದಿ..
ReplyDeleteತುಂಬಾ ಚೆನ್ನಾಗಿದೆ
ಚೆನ್ನಾಗಿದೆ ಚೆನ್ನಅವರೇ
ReplyDeleteನನ್ನ ಬ್ಲಾಗಿಗೆ ಬಂದು ನಿಮ್ಮ ಮುಕ್ತ ಮನಸ್ಸಿನ ಅನಿಸಿಕೆಗಳಿಗಳ ವ್ಯಕ್ತಪಡಿಸಿ, ಪ್ರೋತ್ಸಾಹಿಸಿ ಸದಾ ಹುರಿದುಂಬಿಸುತ್ತಿರುವ ನಿಮಗೆ ನನ್ನ ವಂದನೆಗಳು ಸುಗುಣ ಮಹೇಶ್.
ReplyDeleteವೀಣಾ ಭಟ್ಟರೆ, ಧನ್ಯವಾದಗಳು. ಆಗಾಗ ಬ್ಲಾಗಿಗೆ ಭೇಟಿಯಿತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳ ವ್ಯಕ್ತಪಡಿಸಿ.
ReplyDelete