ನೀವು ಕೇಳಿದಿರೆಂದು
ನನ್ನ ಬಾಳ ವೃತ್ತಾಂತವ,
ನಿಮಗೀಗ ಹೇಳದಿರೆನು
ಎಂದಾದರೂ ಒಂದು ದಿನ
ನಾ ನಿಮಗೆ ಹೇಳಲೇ ಬೇಕು ;
ಈ ಹುಚ್ಚು ಹದಿಹರಯದಲಿ
ನನ್ನ ಮೆಚ್ಚಿ ಕೊಂಡಾಡಿದನೆಂದು
ಹಿಂದೆ ಮುಂದೆ ಯೋಚಿಸದೆ
ಇಚ್ಛೆಯಿಂದಲಿ ಕೈಹಿಡಿದ ತಪ್ಪಿಗೆ
ಕಂಡ ಕಂಡವರಿಗೆ ತಲೆಹಿಡಿದನು
ನನ್ನ ಬಳಿ ಬಂದು ಹೋದವರೆಷ್ಟೋ
ಕೊಂಡು ತಿಂದು ತೇಗಿದವರೆಷ್ಟೋ.....
ಹಿಂಡಿ ಇಪ್ಪೆಯ ಮಾಡಿದರೆಲ್ಲಾ....
ಅಂದೇ ಕಲ್ಲಾಯಿತು ಈ ಹೃದಯ !
ಎಲ್ಲಾ ಮುಗಿಯಿತೆಂದು
ನಾ ಅತ್ತು ಕೊರಗಲಿಲ್ಲ
ಸತ್ತು ಸಾಧಿಸಲಾಗದೆಂದರಿತು
ದಿಟ್ಟ ಹೆಜ್ಜೆಯನಿಟ್ಟು
ನನ್ನಂತೆ ನೊಂದು ಬಂದವರ
ಕಣ್ಣೀರ ತೊಡೆದು
:) :)
ReplyDelete