Thursday, March 20, 2014

ಶ್ರೀದೇವಿ, ವಾಗ್ಧೇವಿ, ಜಯಗೌರಿ

ನಿನಗೆ ಕರ ಮುಗಿವೆ ತಾಯೇ..... ಕರವೀರಪುರವಾಸಿನಿಯೇ.......
ಮನೆ ಮುಂಬಾಗಿಲಿಗೆ ಬಂದು
ಕದ ತಟ್ಟಿ, ಅತ್ತಿತ್ತ ನೋಡುತ
ನೀ ಒಳ ಬರದೆ ಯೋಚಿಸುತ
ಅಲ್ಲಿಯೇ ನಿಂತೆಯೇಕೆ ತಾಯೇ....
ಮನಮಂದಿರದಿ ಮಲ್ಲಿಗೆಯ ಮಂಟಪವಿರಿಸಿ
ಅದರೊಳು ನಿನ್ನನ್ನು ಕುಳ್ಳರಿಸಿ, ನಾ ಪೂಜಿಸಿ
ಅರ್ಚಿಸುವೆ ಬಾ ಬೇಗನೇ ನೀ ಬಾರೆ ತಾಯೇ...
ಮದ ಮತ್ಸರವ ತೊಲಗಿಸಿ
ಅಂಧಕಾರವನು ನೀ ಅಳಿಸಿ
ಜ್ಞಾನ ಜ್ಯೋತಿಯ ಬೆಳಗಿಸಿ
ಸಿರಿ ಸಂಪದವ ನೀ ನೀಡು ಬಾ ತಾಯೇ...
ಶ್ರೀದೇವಿ, ವಾಗ್ಧೇವಿ, ಜಯಗೌರಿಯರೆಲ್ಲರೂ
ನಮ್ಮನು ಹರಸಲು ಬಾಳು ಬಂಗಾರ ತಾನೇ ...

No comments:

Post a Comment