Tuesday, February 11, 2014

" ಎದ್ದು ಹೋಗಲಿಲ್ಲ "....!!

ಮಧ್ಯ ರಾತ್ರಿಯಲಿ  
ಮಡದಿ ಮಕ್ಕಳ ಬಿಟ್ಟು,
ನಾ ಎದ್ದು ಹೋಗಲಿಲ್ಲ;
ಆಸೆಯೇ ದುಃಖಕ್ಕೆ ಮೂಲವೆಂದು
ಈ ಲೋಕಕ್ಕೆ ಸಾರಿ ಸಾರಿ ಹೇಳಲು
ಇಡೀ ಜಗತ್ತಿನ ಜನರ ಮನಗೆದ್ದ
ಆ ಭಗವಾನ್ ಬುದ್ಧನಂತೆ ! 

ಆ ಬುದ್ಧನಿಗೆ ಬದ್ಧತೆಯೂ ಇತ್ತು
ಲೋಕ ಕಲ್ಯಾಣಾರ್ಥಂ
ಇದಂ ಶರೀರಂ ಎಂದು;  
ನನಗೋ ಬದ್ಧತೆಯೂ ಇಲ್ಲ,
ಮೇಲಾಗಿ ಪ್ರಭುದ್ಧತೆಯೂ ಇಲ್ಲವೇ ಇಲ್ಲ
ಕೇವಲ ಕಾಮಾರ್ಥಂ ಇದಂ ಶರೀರಂ !

3 comments:

  1. ಬುದ್ಧ - ಬದ್ಧತೆ - ಪ್ರಭುದ್ಧತೆಯ ವ್ಯಾಖ್ಯಾನ ತುಂಬಾ ಗಾಢವಾಗಿ ಬಂದಿದೆ.

    ReplyDelete
    Replies
    1. ಧನ್ಯವಾದಗಳು ಬದರಿಜಿ.....

      Delete
    2. ಧನ್ಯವಾದಗಳು ಬದರಿಜಿ.....

      Delete