Thursday, March 21, 2013

" ತಾಯೇ ಕನ್ನಡಾಂಬೆ "

ನೀ ಹೆತ್ತ ಮಕ್ಕಳೇ
ನಿನ್ನತ್ತ ನೋಡದೆ
ಉನ್ಮತ್ತರಂತೆ
ಪರದೇಶಿ ಭಾಷೆಗೆ
ಪುಡಿಗಾಸಿನಾಸೆಗೆ
ನಿನ್ನನ್ನೇ ಮರೆತರೆ
ನೀ ಯಾರಿಗೇಳುವೆ
ನೀ ಯಾರ ಕೇಳುವೆ
ನೀ ಕುಣಿದೆದ್ದು ಬಾರದೆ
ಈ ಸಂಸ್ಕೃತಿಯ ಉಳಿವಿಗೆ
ಚಂಡಿ-ಚಾಮುಂಡಿಯಾಗದೆ
ಬುದ್ಧಿಗೇಡಿ ಈ ಜನರಿಗೆ
ಬುದ್ಧಿ ಬಾರದು ತಾಯೇ
ರನ್ನ-ಪೊನ್ನ-ಪಂಪ
ರಾಘವಾಂಕರಾಡಿ ಹೊಗಳಿದ ನಾಡಿದು
ವಿಷ್ಣು-ಕೃಿಷ್ಣ-ಮಯೂರ
ಟಿಪ್ಪು-ಚೆನ್ನಮ್ಮರಾಳಿದ ಭವ್ಯ ಬೀಡಿದು
ಕಲೆಗಳ,ಶಿಲ್ಪಗಳ ತವರೂರು ನಮ್ಮೂರು
ಸಹಸ್ರ ಸಹಸ್ರ ವರ್ಷಗಳ ಇತಿಹಾಸವಿಹುದು
ಕನ್ನಡವೇ ಮರೆತಂತೆ
ವರ್ಷದ ಕೊನೆಗೊಮ್ಮೆ
ನಿತ್ಯ ಉತ್ಸವ, ರಾಜ್ಯೋತ್ಸವ !
ಧರೆಗಿಳಿದು ಬಾ ಬಾ ತಾಯೇ
ಎಲ್ಲರ ಹೃದಯದಲ್ಲಿ ನೀ ಹಚ್ಚಿ
ಕನ್ನಡದ ನಾಡ ನುಡಿ ದೀಪ
ತೊಳೆಯ ಬೇಕಿದೆ ಮಲಿನಗೊಂಡ
ನಮ್ಮೆಲ್ಲರ ಮನದೊಳಗಿನ ಪಾಪ !

No comments:

Post a Comment