ನನ್ನೊಳಗೆ
ಏನಿದೆ ಬರೀ
ಸಾರವಿರದ
ಉಡಿ ಮಣ್ಣು
ಆದರೂ, ಎಲ್ಲೆಲ್ಲೂ
ಹುಡುಕುತಿಹೆ
ನಾನು ಇನ್ನೂ
ಕಲಿತದ್ದು ಹಿಡಿ
ಸಾಸುವೆಯಷ್ಟು
ಕಲಿಯ ಬೇಕಾದ್ದು
ಮಹಾ ಸಾಗರದಷ್ಟು
ತಾಯ್ತಂದೆಗಳು ಇತ್ತ
ಸಂಸ್ಕಾರ ಜ್ಞಾನ ಧೀಕ್ಷೆ
ಗುರು-ಹಿರಿಯರು ಇತ್ತ
ಜ್ಞಾನ-ಜ್ಯೋತಿಯ ಭಿಕ್ಷೆ
ಅರಿವನ ದಾಹದ ಗುರಿಯ ಕಕ್ಷೆಗೆ
ವರ್ತುಲ ವರ್ತುಲ ಮೀರಿದ ಪರೀಕ್ಷೆಗೆ
ಸಾಧಿಸೊ ಛಲದಂಕ ಮಲ್ಲನ ನಿರೀಕ್ಷೆಗೆ
ಸರಿಸಾಟಿಯಾಗಿ ನಿಲ್ಲುವೆ " ಓ ಮನಸೇ"
ನೀ ನನ್ನ ಹರಸಿ, ಉತ್ತುಂಗದೆತ್ತರಕ್ಕೆ ಉದ್ದರಿಸೆ.
No comments:
Post a Comment