Thursday, March 21, 2013

" ತಾಯೇ ಭಾರತಾಂಬೆ "

ನೀ ಹೊತ್ತ ಮಕ್ಕಳೇ
ಎಚ್ಚೆತ್ತು ಕೊಳ್ಳದೆ
ಹುಚ್ಚೆದ್ದು ಕುಣಿವಾಗ
ನೀ ಅತ್ತು ಕರೆದರೂ
ಸಿಟ್ಟೆದ್ದು ಒದ್ದರೂ
ಕೇಳದಾ ಕಿವುಡರಿವರು

ಕಿಡಿಗೇಡಿಗಳು ಹಚ್ಚಿಟ್ಟ
ಜಾತಿ ಧರ್ಮದ ವಿಷ
ಬೆಂಕಿಯ ಕೆನ್ನಾಲಿಗೆಗೆ
ಹೊತ್ತಿ ಉರಿದವರೆಷ್ಟೋ

ಬಸವ ಬುದ್ಧರಿಗಿರಲಿಲ್ಲ
ಜಾತಿ ಧರ್ಮಗಳ ಭೇದ
ಎಲ್ಲರಲ್ಲೂ ಸಮಾನತೆಯ
ಸಾಮರಸ್ಯದ ಹಣತೆಯ
ದೀಪ ಹಚ್ಚಿಟ್ಟರು, ನಾವೆಲ್ಲರೂ
ಎಂದೆಂದು ಒಂದೇ ಎಂದರೂ

ದೃಪದ ನಂದಿನಿ ದ್ರೌಪದಿಯ
ಧರ ಧರನೆ ಎಳೆ ತಂದು
ಸರ ಸರನೆ ಸೀರೆ ಸೆಳೆದ
ಧುರುಳ ಕೌರವರು ಅಂದು

ನಿನ್ನನ್ನೇ ಬೆತ್ತಲೆ ಮಾಡಿ 
ಕತ್ತಲೆಯ ಕಳ್ಳಾಟದಿ
ಮೃಷ್ಟಾನ್ನವ ಉಂಡು
ತೇಗುವ ನರ ರೂಪ
ರಕ್ಷಸರಿವರು ಇಂದು

ನಿನ್ನೊಡಲ ಉಡಿ ಮಣ್ಣ
ಅಗೆದಗೆದು, ಬಗೆದು
ಗಣಿ ಧೂಳಿನಿಂದಲೆಷ್ಟೋ
ಶ್ರೀಮಂತರಾದರು ಜನ !

No comments:

Post a Comment