Monday, May 13, 2013

ನನ್ನ ಕಾಪಾಡಿದ ಭೂತಜ್ಜ

ಹೀಗಿರುವಂತೆ ಮೊದಲೆಲ್ಲಾ
ಬಸ್ಸು ಮೋಟಾರ್ ಸೈಕಲ್ಲು;
ಮೊಬೈಲ್ ಫೋನ್ ಇರಲಿಲ್ಲ
ಊರಿಂದ ಊರಿಗೆ ಹೋಗಲು
ಎತ್ತಿನ ಗಾಡಿಯೋ, ಜಟಕಾ ಬಂಡಿಯೋ
ನಡೆದೋ, ಇಲ್ಲಾ ಸೈಕಲ್ ತುಳಿದೋ
ಹೋಗ ಬೇಕಿತ್ತು, ಗುರಿ ಮುಟ್ಟ ಬೇಕಿತ್ತು !

ಅಮ್ಮ ಬೇಡವೆಂದರೂ, ಒಂದು ಬೆಳ್ಳಂ ಬೆಳಗ್ಗೆ
ಸ್ನೇಹಿತನ ಮುದ್ದು ತಂಗಿಯ ಮದುವೆಗಾಗಿ
ಎರಡು ದಿನ ಇರುವಾಗಲೇ ನಾ ಹೊರಟೆ
ಅಮ್ಮಕಟ್ಟಿ ಕೊಟ್ಟಿದ್ದ ರಾಗಿಯ ರೊಟ್ಟಿ
ಹುಚ್ಚೆಳ್ಳು ಚಟ್ನಿ, ಗಟ್ಟಿ ಮೊಸರಿನ ಬುತ್ತಿಯ
ಚೀಲ ಕ್ಯಾರಿಯರಲ್ಲಿ ಹಾಯಾಗಿ ಕುಳಿತಿತ್ತು !

ಅಷ್ಟೇನು ಬಿಸಿಲಿಲ್ಲದೆ ಹಾಯಾಗಿ ಸೈಕಲ್ಲು
ತುಳಿದು, ಹತ್ತಾರು ಮೈಲುಗಳ ಕ್ರಮಿಸಿ
ನಡು ನತ್ತಿಗೆ ಸೂರ್ಯ ಬಂದು ನಿಂತಾಗಲೇ
ಆಯಾಸ ಗೊತ್ತಾಗಿದ್ದು, ಮುಂದೆ ಎಲ್ಲಾದರೂ
ನೀರು ಕಂಡರೆ, ಬುತ್ತಿ ಬಿಚ್ಚೋಣವೆಂದು ಕೊಂಡು
ಯೋಚಿಸುವಾಗಲೇ ನಡೆಯಲಾರದೆ ಅಜ್ಜನೊಬ್ಬ
ಅಲ್ಲಿಯೇ ಕುಸಿದು ಬಿದ್ದಾಗ ಕನಿಕರಿಸಿ ಮೇಲೆತ್ತಿದ್ದೆ !
ನೀರ ಕುಡಿಸಿ ಉಪಚರಿಸಿ, ತಂದ ಬುತ್ತಿಯಲ್ಲೇ
ಇಬ್ಬರೂ ಹಂಚಿ ತಿಂದು, ಸೈಕಲ್ಲಲ್ಲಿ ಕರೆದ್ಯೋದೆ !

ಏನ್ ಅಜ್ಜಾ...ನೀ ಇಷ್ಟೊಂದು ಭಾರವೇ
ಸೈಕಲ್ ತುಳಿಯೋಕೆ ಕಷ್ಟ ಹಾಗ್ತ ಇದೇ
ಒಳ್ಳೇ ಹೆಣ ಹೊತ್ತೋರ ಭಾರದಂತಿದೆ
ನೀನ್ ನೋಡ್ದರೆ ಗಾಳಿಗೆ ಹಾರೋಗೋ
ಕಡ್ಡಿಯ ತರ ಇದ್ದೀಯ ಏನ್ಮಾಡ್ಲಿ ತಾತ
ತುಂಬಾ ಕಷ್ಟ, ಈಗ ತುಳಿಯೋ ಮೊಮ್ಮಗನೇ
ನನಗೋ ಆಶ್ಚರ್ಯ, ಗಾಳಿಯಲ್ಲಿ ತೇಲಿದನುಭವ !

ದೂರದಲ್ಲೆಲ್ಲೋ ಒಂದು ಹೆಣ್ಣಿನ ಮಧುರವಾದ
ಹಾಡಿನ ತರಂಗ ಮೈಮನ ಸೆಳದಿತ್ತು, ಈ ಹಾಡೇ
ಇಷ್ಟು ಇಂಪಾಗಿರ ಬೇಕಾದರೆ ಇನ್ನು ಹಾಡುವ ಆ
ಹೆಣ್ಣು ಎಷ್ಟು ಅತಿ ಸುಂದರಿಯಾಗಿರ ಬೇಕು !!!

ಎದುರು ಬರುತ್ತಿದ್ದವಳ ಕಂಡು, ಒಂದು ಕ್ಷಣ ನಾನೇ
ಧಂಗಾಗಿ ಹೋಗಿದ್ದೆ, ಅವಳ ಅಪ್ರತಿಮ ರೂಪ
ಸೌಂದರ್ಯ ರಾಶಿಯ ನಾ ಎಲ್ಲೂ ಕಂಡಿರಲಿಲ್ಲ !
ತುಂಬು ಏರು ಜವ್ವನೆ, ಒಮ್ಮೆ ನೋಡಿ ನಕ್ಕಳಷ್ಟೇ
ಎದೆಯೊಳಗೆ ನೂರಾರು ಮಿಂಚು ಬೆಳಗಿ ಒಮ್ಮೆಲೇ ಮರೆಯಾಗಿತ್ತು, ಮುಂದೆ ಹೋದವನು ನಿಲ್ಲಿಸಲು,
ನೀ ಬೇಡ ಕಂದಾ ಬೇಡ ಎಲ್ಲಿಯೂ ನಿಲ್ಲಿಸ ಬೇಡ
ಆ ಮಾಯಾವಿ ಹೆಣ್ಣಲ್ಲ , ದೆವ್ವ !!??

ನಿನಗೇಗೆ ಗೊತ್ತು ಅಜ್ಜಾ, ಅವಳು ಹೆಣ್ಣಲ್ಲ ದೆವ್ವವೆಂದು
ಅಯ್ಯೋ ನನ್ನ ಕಂದ ನಾನು ನಿನ್ನ ಪೂರ್ವಿಕನೋ
ನಾನು ಸಹ ಅದರಂತೆ ನಿನ್ನ ಕಾಪಾಡಲು ಬಂದ ದೆವ್ವ

2 comments:

  1. ಒಂದು ಕ್ಷಣ ಎದೆ ಝಲ್ ಎಂದಿತು ಗೆಳೆಯ. ಎಂತಹ ನಿರೂಪಣೆ.

    http://www.badari-poems.blogspot.in

    ReplyDelete
  2. ಧನ್ಯವಾದಗಳು ನಿಮ್ಮ ಈ ಪ್ರೋತ್ಸಾಹವೇ ನಾ ಇಷ್ಟೆಲ್ಲಾ ಬರೆಯಲು ಸಾಧ್ಯ.

    ReplyDelete